Wednesday, 9 August 2017

ನನ್ನ ಭಾರತ

ಅಂದು ವಿವೇಕಾನಂದರು ಹೇಳಿದರು ಏಳಿ ಎದ್ದೇಳಿ ಎಂದು
ಇಂದು ಯಾರಾದರೂ ಹೇಳಬೇಡವೇ ಏಳಿ ಎದ್ದೇಳಿ ಎಂದು

ಏಳಬೇಕು ನಾವಿಂದು ಬ್ರಷ್ಟಾಚಾರದಿಂದ
ಜಾಗೃತರಾಗಬೇಕು ನಾವಿಂದು ಅತ್ಯಾಚಾರದಿಂದ

ಕಟ್ಟಬೇಕು ನಾವು ಭವ್ಯ ಭಾರತವನಿಂದು
ಕನಸಾಗಿಸಬೇಕು ಕಲಾಂ ಅವರ ಆಸೆಗಳನಿಂದು

ಗಡಿನಾಡಿನಲ್ಲಿ ರಕ್ತ ಕೊಟ್ಟ ನಮ್ಮ ಯೋಧರಿಗಾಗಿ
ಹೊಲ ಗದ್ದೆಯಲಿ ದುಡಿವ ನಮ್ಮ ಅನ್ನದಾತರಿಗಾಗಿ

ಬನ್ನಿ ಎಲ್ಲಾ ಸೇರಿ ನಿಲ್ಲೋಣ ನವ ಭಾರತ ನಿರ್ಮಾಣಕ್ಕಾಗಿ
ಎದೆಯುಬ್ಬಿಸಿ ಹೇಳೋಣ ನಾವಿದ್ದೀವಿ ನಿಮ್ಮ ಜೊತೆಯಾಗಿ

ಭಾರತ್ ಮಾತಾ ಕಿ ಜೈ !!

No comments:

Post a Comment